ಅಗ್ರಮಾನ್ಯ ಕಲಾವಿದ ನಗರ ಜಗನ್ನಾಥ ಶೆಟ್ಟಿ ದಶಮ ಸಂಸ್ಮರಣೆ ಪೂರ್ವಬಾವಿ ಸಭೆ-ವಿಚಾರ ವಿನಿಮಯ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಸೆಪ್ಟೆ೦ಬರ್ 28 , 2013
|
ಸೆಪ್ಟೆ೦ಬರ್ 27 , 2013
|
ಅಗ್ರಮಾನ್ಯ ಕಲಾವಿದ ನಗರ ಜಗನ್ನಾಥ ಶೆಟ್ಟಿ ದಶಮ ಸಂಸ್ಮರಣೆ ಪೂರ್ವಬಾವಿ ಸಭೆ-ವಿಚಾರ ವಿನಿಮಯ
ಬ್ರಹ್ಮಾವರ :
ಬಡಗುತಿಟ್ಟನ್ನು ತನ್ನದೇ ವಿಶಿಷ್ಟ ನಗರ ಶೈಲಿಯಿಂದ ಶ್ರೀಮಂತಗೊಳಿಸಿದ ಹಿರಿಯ ಯಕ್ಷಗಾನ ಕಲಾವಿದ ನಗರ ಜಗನ್ನಾಥ ಶೆಟ್ಟರು ನಮ್ಮನ್ನಗಲಿ ಹತ್ತು ವರ್ಷ ಕಳೆದಿದ್ದು ಅವರ ದಶಮ ಪುಣ್ಯ ಸಂಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಬಗ್ಗೆ ನಗರದವರ ಅಭಿಮಾನಿಗಳ ಸಭೆಯು ಬ್ರಹ್ಮಾವರ ರೋಟರಿ ಸಬಾಭವನದಲ್ಲಿ ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿಯವರ ಅದ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಪೆರ್ಡೂರು ಮೇಳದ ಯಜಮಾನ ವೈ. ಕರುಣಾಕರ ಶೆಟ್ಟಿಯವರನ್ನು ಸಮಿತಿಯ ಅದ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟರು ಪ್ರಾಸ್ತಾವಿಕವಾಗಿ ಮಾತನಾಡಿ ನಗರದವರ ಕಲಾಜೀವನದ ಮೇಲೆ ಬೆಳಕು ಚಲ್ಲಿದರು. ಮಂಗಳೂರು ನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ,ಉಡುಪಿ ರಂಗಸ್ಥಳ ಪ್ರದಾನ ಕಾರ್ಯದರ್ಶಿ ಮಹಾಬಲ ಕುಂದರ್,ವೈ ಕರುಣಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಸಂಗಕರ್ತ ಬಸವರಾಜ ಶೆಟ್ಟಗಾರ್,ಚಂದ್ರಶೆಖರ ಹೆಗ್ಡೆ,ಬೇಳೂರು ಶಂಕರ ಹೆಗ್ಡೆ ಮುಂತಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಲಾವಿದರ ಪರವಾಗಿ ಐರೋಡಿ ಗೋವಿಂದಪ್ಪ,ಮೊಳಹಳ್ಳಿ ಹೆರಿಯ ನಾಯಕ್,ಎಳ್ಳಂಪಳ್ಳಿ ಜಗನ್ನಾಥ ಆಚಾರ್ ಮಾತನಾಡಿದರು. ಜಗನ್ನಾಥ ಸಂಸ್ಮರಣಾ ಸಮಿತಿ ರಚಿಸಲಾಯಿತು. ಸಮಿತಿಯ ಮೂಲಕ ನಗರದವರ ಕುಟುಂಬಕ್ಕೆ ದನ ಸಹಾಯ ಮಾಡುವುದೆಂದು ನಿರ್ಣಯಿಸಲಾಯಿತು.
ದೂರದ ಊರುಗಳಿಂದ ನಗರದವರ ಅಸಂಖ್ಯ ಅಬಿಮಾನಿಗಳು ಆಗಮಿಸಿದ್ದರು. ನಿಯೋಜಿತ ಸಮಿತಿಯ ಕಾರ್ಯದರ್ಶಿ ಸರ್ಪು ಸದಾನಂದ ಪಾಟೀಲ್ ಸ್ವಾಗತಿಸಿ ವಂದಿಸಿದರು.
|
|
|